Skip to main content

ಬೇಕಾಗಿದ್ದಾರೆ ಭಾಗ-1

******..ಬೇಕಾಗಿದ್ದಾರೆ.. ****

        ‌ಪಿಯುಸಿ ಪರೀಕ್ಷೆ ಮುಗಿಸಿ ಮೂರು ವರ್ಷದಿಂದ ರಜೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಹೋಟೆಲ್ ನತ್ತ ಹೆಜ್ಜೆ ಹಾಕಿದ್ದೆ,
ಮುಂದೆ ಓದು ನಿಲ್ಲಿಸೋದ?, ಡಿಗ್ರಿ ಹೋಗೋದಾ?, ಪಾಲಿಟೆಕ್ನಿಕ್ ಕೋರ್ಸ್'ನತ್ತ ತಲೆ ಹಾಕೋದ? ಎನ್ನುವ ಯೋಚನೆ. ಪಿಯುಸಿ ಆದ ಮೇಲೆ ಇಲ್ಲೇ ಇಕ್ಕಟ್ಟು ಆಗೋದು ನೋಡಿ.

 ಏನೇ ಆಗಲಿ ಮೊದಲು ರಿಸಲ್ಟ್ ಬರಲಿ ಆಮೇಲೆ ನೋಡೋಣ ಎಂದು ಹೋಟೆಲ್ನ ಕೆಲಸದೊಳಗೆ ಮುಳುಗಿಹೋದೆ. ಪ್ರತಿವರ್ಷ ನಾನು ಹಾಗೂ ನೀತಿನ್ ಬೇಸಿಗೆ ಹಾಗೂ ದಸರಾ ರಜೆಗೆ ಹೋಟೆಲ್'ಗೆ ಖಾಯಂ ಕೆಲಸಗಾರರು. ನಮ್ಮನ್ನು ಕೆಲಸ ಮಾಡಿಸಿಕೊಳ್ಳುವ ರೀತಿ ಹಾಗೂ ಕಾಳಜಿಯಿಂದ ನೋಡಿಕೊಳ್ತಾ ಇದ್ದುದ್ದರಿಂದ ಹೋಟೆಲ್, ಹಾಗೂ ಅಲ್ಲಿನ ಕೆಲಸಗಾರರು ತುಂಬಾ ಆಪ್ತವಾಗಿದ್ದರು. ಆದ್ದರಿಂದ ಬೇರೆ ಕಡೆ ಕೆಲಸ ಹುಡುಕುವ ಯೋಚನೆ ಮಾಡಲು ಕೂಡ ಹೋಗಿರಲಿಲ್ಲ.

ಪಿಯುಸಿ ಬರುವ ಹೊತ್ತಿಗೆ  ಕ್ಲಿನರ್, ಪಾತ್ರ ತೊಳೆಯುವುದು, ತರಕಾರಿ ಕಟ್ ಮಾಡುವುದರಿಂದ ಹಿಡಿದು ದೋಸೆ ಹಾಕುವವರೆಗೆ ಕಲಿತಿದ್ದೆ. ಇನ್ನೊಂದು ವರ್ಷ ಅಲ್ಲೇ ಇರುತ್ತಿದ್ದರೆ ಒಂದಷ್ಟು ಅಡುಗೆ ಮಾಡೋದು ಕೂಡ ಕಲಿಯುತ್ತಿದ್ದೆ. ಅಂತೂ ಮೇ ನಲ್ಲಿ Result ಬಂತು First ಕ್ಲಾಸ್ ನಲ್ಲಿ ಪಾಸ್ ಕೂಡ ಆಗಿದ್ದೆ. ಯಾವ ದಾರಿ ಹಿಡಿಯೋದು ಎಂದು ಮಾತ್ರ ಗೊತ್ತಾಗಲಿಲ್ಲ.  ನನಗೆ ಡಿಗ್ರಿ ಹೋಗಬೇಕು ಅನಿಸಿದ್ರೆ. ಮನೆಯಲ್ಲಿ ಯಾವುದರು ಪಾಲಿಟೆಕ್ನಿಕ್ ಮಾಡು ಎಂಬ ಬುದ್ಧಿವಾದ. ಆದರೆ ಊರಲ್ಲಿಯೇ ಒಂದಷ್ಟು ಜನ iti ಡಿಪ್ಲೊಮಾ ಮಾಡಿದವರ ಸ್ಥಿತಿ ನೋಡಿದಾಗ ಪಾಪ ಅನಿಸುತ್ತಿತ್ತು. ಮುಂದಿನ ದಿನಗಳ ಬಗ್ಗೆ ಯೋಚಿಸಿದಾಗ, ಹೋಟೆಲ್ನ ದಿನ ಸಂಬಳ ಯಾವುದಕ್ಕೂ  ಸಾಲೊದಿಲ್ಲ ಇಲ್ಲೇ ಇದ್ರೆ ನಿಂತ ನೀರಾಗ್ಬಿಡ್ತೇನೆ, ಇಲ್ಲಿಗೊಂದು ಪೂರ್ಣ ವಿರಾಮ ಇಡಲೇಬೇಕು ಎಂಬ ತೀರ್ಮಾನಕ್ಕೆ ಬಂದಿದ್ದೆ. ನಮ್ಮ ಹುಡುಗರಿಗೆ ಯಾವುದಾದರೂ ಒಂದು ಕೆಲಸ ಇದ್ದರೆ ತಿಳಿಸಿ ಮರ್ರೆ ಎಂದಿದ್ದೆ.

      ಒಂದಷ್ಟು ದಿನದ ನಂತರ ಹೈಸ್ಕೂಲ್ ಸಹಪಾಠಿ ಸಂದೀಪ್ ಕರೆ ಮಾಡಿ, ಬೆಂಗಳೂರಿನಲ್ಲಿ ಕೆಲಸ ಇದೆಯಂತೆ ನಮ್ಮ ಅವಿನಾಶ್ ನೋಡಿಕೊಂಡು ಬಂದಿದ್ದಾನೆ. ಪಿಯುಸಿ ಕ್ವಾಲಿಫಿಕೇಶನ್ ಮೇಲೆ, 12000 ಸಂಬಳ ಅಂತೆ ರೂಮ್, ಊಟ ಅವರದೇ ಅಂತೆ. ಎಲ್ಲ ಮಾತುಗಳನ್ನು ಅಂತೆಯಲ್ಲಿಯೇ ಮುಗಿಸಿದ್ದ!. ದಿನಕ್ಕೆ 200ರೂ. ದುಡಿಯುತ್ತಿದ್ದವನಿಗೆ ಅದರ ಡಬ್ಬಲ್ ಸಿಗುತ್ತೆ ಅಂದ್ರೆ. ಒಂದು ಕ್ಷಣಕ್ಕೆ ಸ್ವರ್ಗದಲ್ಲಿ ತೇಲಾಡಿದಂತಾಯ್ತು. ಅವಿನಾಶ್'ನಿಗೆ ಕರೆಮಾಡಿ ಮಾತಾಡಿ ಕೊನೆಗೆ ಮೂವರು ಹೋಗುವುದೆಂದು ತೀರ್ಮಾಣವಾಯಿತು. ಜೊತೆಗೆ ಒಂದು ಮೊಬೈಲ್ ನಂಬರ್ ಕೊಟ್ಟು ಈ ನಂಬರ್'ಗೆ ಕರೆಮಾಡಿ ಜಾಬ್ confirm ಮಾಡಿಕೋ ಎಂದು ಹೇಳಿದ. ನಾನು ಆ ನಂಬರ್ ಗೆ ಒಂದೇ ಸಲ ಕರೆಮಾಡಿ ಮಾತಾಡಿದ್ದಷ್ಟೇ, ಆ ಕಡೆಯಿಂದ female voice ನೊಂದಿಗೆ ಎರಡು ದಿನಕೊಮ್ಮೆ ಕರೆ ಬರಲು ಶುರುವಾಯಿತು. ಯಾವಾಗ ಜಾಬ್ ಗೆ join ಆಗುತ್ತಿರಾ ಸರ್. Workersನ ಅವಶ್ಯಕತೆ ತುಂಬಾ ಇದೆ. ಬರೀ 3ತಿಂಗಳು ಟ್ರೈನಿಂಗ್ ಅಷ್ಟೇ  ಈ ಕಾಲ್ ಗಳನ್ನು ನೋಡಿದಾಗ ಎಲ್ಲೋ ಒಂದು ಕಡೆ ದಾರಿ ತಪ್ಪಿದೇವೋ ಎಂದು ಸಣ್ಣದಾಗಿ ಅನುಮಾನ ಬಂದಿತ್ತು. ಆದ್ರೂ ಅವಿನಾಶ್ ನೋಡಿಕೊಂಡು ಬಂದಿದ್ದಾನಲ್ಲ, ಮತ್ಯಾಕೆ ಚಿಂತೆ ಮಾಡೋದು, ಎಂದು ಮನೆಯಲ್ಲಿ ಮೆಲ್ಲಗೆ ಅನುಮತಿಗೆ ಕೋರಿದ್ದೆ. ಭಾರಿ ಕಷ್ಟದಲ್ಲಿ ಮನೆಯಿಂದ ಅನುಮತಿ ಸಿಕ್ಕಿತು.

ಅಂತೂ  ಧರ್ಮಸ್ಥಳದಿಂದ ಬೆಂಗಳೂರಿನತ್ತ ಬಸ್ಸಿಡಿದು ಹೊರಟೆವು. ಕೊನೆಯಲ್ಲಿ ಪಿಯುಸಿಯ ಕರುಣಾಕರ ಕೂಡ ನಮ್ಮ ಜೊತೆ ಸೇರಿಕೊಂಡ. ಪ್ರತಿ ಸಲ ಕೆಂಪು ಬಸ್ಸಿನಲ್ಲೇ ಹೋಗುತ್ತಿದ್ದ ನಾನು. ಮೊದಲ ಬಾರಿಗೆ ಅವಿನಾಶ್ ನ ಒತ್ತಾಯಕ್ಕೆ ರಾಜಹಂಸ ಹತ್ತಿದೆವು. ನಾಲ್ವರು ಕೂಡ ಉದ್ಯೋಗ ಆಕಾಂಕ್ಷೆಗಳನ್ನು ಹೊತ್ತುಕೊಂಡು ಬೆಳಗ್ಗೆ 6 ಗಂಟೆಯೊತ್ತಿಗೆ ಬೆಂಗಳೂರಿನ ಮಜೆಸ್ಟಿಕ್ ಮಣ್ಣಿಗೆ sorry ಕಾಂಕ್ರೀಟ್ ರೋಡ್ ಗೆ ಪಾದಸ್ಪರ್ಶ ಮಾಡಿದೆವು. ಬಸ್ಸಿನಿಂದ ಇಳಿದು ಸಾಗರದಂತಿದ್ದ ಬಸ್ಸಿನ ಸಾಲುಗಳತ್ತಾ ಕಣ್ಣಾಯಿಸಿ. ಬರೀ ಬಸ್ಟ್ಯಾಂಡೆ ಇಷ್ಟು ದೊಡ್ಡದಾ!? ಎಂದು ಕೊಳ್ಳುತ್ತಾ.  ‌ಅಲ್ಲಿಂದ ಮುಖ ತೊಳೆದುಕೊಂಡು ಅದ್ಯಾವುದೋ ಒಂದು ಹೋಟೆಲ್ ಗೆ ನುಗ್ಗಿದೆವು.


‌ತಿಂದು ತೇಗಿ ಬಿಲ್ ನೋಡಿದ ಮೇಲೆನೆ ಗೊತ್ತಾಗಿದ್ದು ಹೋಟೆಲ್ ಸ್ವಲ್ಪ ಗಟ್ಟಿದ್ದು ಎಂದು. ಮೊದಲಬಾರಿಗೆ 19 ರೂಪಾಯಿಯ  ಚಾ ಕುಡಿದಿದ್ದು ಹೆಮ್ಮೆ ಅಂತ ಹೇಳಿಕೊಳ್ಳಬೇಕಾ ಗೊತ್ತಾಗಲಿಲ್ಲ.

‌ತಂದಿದ್ದ 5000 ಸಾವಿರ ರೂ. ಮೆಲ್ಲಗೆ ಕರಗತೊಡಗಿತ್ತು. ಅಲ್ಲಿಂದ ಸೀದಾ ಕಂಪೆನಿಯವರು ಹೇಳಿದಂತೆ ಮಲ್ಲೇಶ್ವರಂ ಬಳಿ ಇಳಿದೆವು. ಅಲ್ಲಿಂದ ಎಲ್ಲಿಗೆ ಹೋಗಬೇಕು ಎಂದು ಗೊತ್ತಾಗದೆ ಅವಿನಾಶ್ ನೀನು ಇದಕ್ಕಿಂತ ಮುಂಚೆ  ಬಂದಿದ್ಯಲ್ಲ ನಿನಗೆ ಗೊತ್ತಿದೆಯಲ್ವಾ? ಎಂದು ಕೇಳಿದಾಗ, ಏನು ಮಾತನಾಡಲಿಲ್ಲ.
‌actually ಈ ಮಂಗ ಇಲ್ಲಿಗೆ ಬಂದೆ ಇರಲಿಲ್ಲ. ನಾವು ಕೂಡ ಇವನ ಜೊತೆ ಬರ್ಲಿ ಅಂತ ನಮಿಗೆಲ್ಲ ಸುಳ್ಳು ಹೇಳಿದ್ದ. ಅವಾಗ್ಲೇ ಗೊತ್ತಾಗಿದ್ದು, ನಾವು ಇಲ್ಲಿವರೆಗೆ "ಬೇಕಾಗಿದ್ದಾರೆ" ಜಾಹಿರಾತು ಮೂಲಕ  ಬಂದಿದ್ದು ಎಂದು...

ಮುಂದುವರಿಯುತ್ತೆ...

Comments

Popular posts from this blog

ಬಂಡಾಜೆಯ ಹಾದಿ

               ===== ಬಂಡಾಜೆಯ ಹಾದಿ ===== ಮುಂಡಾಜೆ ಹಾಸ್ಟೆಲ್ನಲ್ಲಿ ಇರುವಾಗಲೇ ನನಿಗೆ ಬಂಡಾಜೆಗೊಮ್ಮೆ ಹೋಗ್ಬೇಕು ಎಂಬ ಆಸೆ ಮೂಡಿತ್ತು.(ಎಂಟು ವರ್ಷದ ಹಿಂದೆ)ಯಾಕೆಂದರೆ ಬೆಳ್ಳಿಯ ಹೊಳಪಿನಿಂದ ವಯ್ಯಾರದಿಂದ ಮೇಲಿಂದ ಜಿಗಿಯುವುದು ನಮ್ಮ ಹಾಸ್ಟೆಲ್ಗೆ ಕಾಣುವಷ್ಟು ಅಂದವಾಗಿ ಬೇರೆಲ್ಲಿಯೂ ಕಾಣಿಸೋದಿಲ್ಲ ಅನಿಸುತ್ತೆ. ಮೊನ್ನೆ ಎಕ್ಸಾಮ್ ಮುಗಿದ ಮೇಲೆ ಎಲ್ಲಿಗಾದರು ಹೋಗಬೇಕು ಎಂದು ಅನಿಸಿದಾಗಲೇ ಬಂಡಾಜೆಗೆ ಹೋಗೋಣವೆನಿಸಿತು. ಒಂದೈದು ಜನಕ್ಕೆ ಕರೆಮಾಡಿ ಕೊನೆಗೆ ಹಮೀದ್, ರಕ್ಷಿತ್ ಸಿಕ್ಕರು. ಎರಡು ಬೈಕಿನಲ್ಲಿ ಬೆಳಗ್ಗೆ 8 ಗಂಟೆಗೆನೆ ಬ್ಯಾಗ್'ಗೆ ನೀರು, ಬಿಸ್ಕೆಟ್ ಪ್ಯಾಕೇಟ್ಗಳನ್ನು ತುಂಬಿಕೊಂಡು, ನಾವು ಮೂವರು ಬಂಡಾಜೆಯ ತಣ್ಣನೆಯ ನೀರನ್ನು ಸ್ಪರ್ಶಿಸಲು ಹಾತೊರೆಯುತ್ತ ಹೊರಟೆವು. ಪಶ್ಚಿಮ ಘಟ್ಟದ ಬುಡಕ್ಕೆ ಹೋಗಿ ಬಂಡಾಜೆಯ ತುತ್ತಾ ತುದಿಗೆರಲು ಅರಣ್ಯ ಇಲಾಖೆಗೆ ಸಂಬಂಧಿಸಿದವರ ಅನುಮತಿಯನ್ನು ಪಡೆದುಕೊಂಡು ಪ್ರಶಾಂತವಾಗಿದ್ದ ಕಾಡೊಳಗೆ ಹೆಜ್ಜೆ ಹಾಕಿದೆವು. ದಾರಿ ತುಂಬಾ ತರೆಗೆಲೆ ಹರಡಿದ್ದರಿಂದ ಪ್ರತಿ ಹೆಜ್ಜೆ ಕೂಡ ಕಾಡಿನ ನಿಶಬ್ಧತೆಗೆ ಭಂಗ ತರುವಂತಿತ್ತು. ಆಗ ತಾನೇ ಮೇಲೇರುತ್ತಿದ್ದ ಸೂರ್ಯ ಕಾಡೊಳಗಿನ brightnessನ್ನು ಹೆಚ್ಚಿಸಲು ಮರಗಳ ಚಪ್ಪರದೊಂದಿಗೆ ಸೆಣಸುತ್ತ ಲಗ್ಗೆ ಇಡುತ್ತಿದ್ದ. ನಾವು ಮಾತ್ರ ಲೋಕದ ಚಿಂತೆಗಳೆಲ್ಲವನ್ನು ಬಿಟ್ಟು ಕಾಲಿ...

ತಡಿಯಂಡಮೊಳ್ ಚಾರಣ ಭಾಗ -2, ನಾಲ್ನಾಡು ಅರಮನೆ.

ತಡಿಯಂಡಮೊಳ್ ಚಾರಣ ಭಾಗ -2, ನಾಲ್ನಾಡು ಅರಮನೆ.           ಅರಮನೆಯನ್ನು ನೋಡಿಕೊಳ್ಳುವವರು ನಮ್ಮನ್ನೋಡಿ ವೇಗವಾಗಿ ಧಾವಿಸಿ ನಗುಮೊಗದಿಂದಲೇ ಸ್ವಾಗತಿಸಿದರು. ಅಂದಾ ಹಾಗೆ, ಈ ನಾಲ್ನಾಡು ಅರಮನೆಯ ನಿರ್ಮಾಣದ ಕುರಿತು ಇತಿಹಾಸವನ್ನು ಹುಡುಕುತ್ತ ಹೋದರೆ, ದೊಡ್ಡವೀರ ರಾಜೇಂದ್ರರು ಶತ್ರುಗಳಿಂದ ತನ್ನ ಕುಟುಂಬವನ್ನು ಕಾಪಾಡಿಕೊಳ್ಳುವ ಸಲುವಾಗಿ ಸೂಕ್ತ ಸ್ಥಳವನ್ನು ಹುಡುಕುತ್ತ ಬಂದಾಗ ಅವರ ಕಣ್ಣಿಗೆ ಬಿದ್ದಿದ್ದು ಈ ಬೆಟ್ಟ ಶ್ರೇಣಿಗಳಿಂದ ಹಾಗೂ ದಟ್ಟವಾದ ಕಾನನದಿಂದ ಸುತ್ತುವರೆದ ಯುವಕಪಾಡಿ ಗ್ರಾಮದಲ್ಲಿರುವ ಈ ಪ್ರದೇಶ. ಈ ಸ್ಥಳದಲ್ಲಿ 1792ರಲ್ಲಿ ಎರಡು ಅಂತಸ್ತಿನ ಸಣ್ಣ ಅರಮನೆಯನ್ನು  ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತೆ. ಅರಮನೆಯನ್ನು ನೋಡಿಕೊಳ್ಳುವವರು, ನಮ್ಮ ಊರಿನ ಬಗ್ಗೆ ಹಾಗೂ ನಮ್ಮ ಪರಿಚಯ ಮಾಡಿಕೊಳ್ಳುತ್ತಾ, ಅರಮನೆಯ ಬಗ್ಗೆ ಮಾಹಿತಿಯನ್ನು ನೀಡುತ್ತಾ ಅರಮನೆಯೊಳಗೆ ಹೆಜ್ಜೆ ಹಾಕಿದರು. ನಾವು ಅವರನ್ನು ಹಿಂಬಾಲಿಸುತ್ತಾ ಮುಖ್ಯ ದ್ವಾರವನ್ನು ದಾಟಿ ಅರಮನೆಯೊಳಗೆ ಹೋದಾಗ ಬಲ ಬದಿಯಲ್ಲಿ ಒಂದು ಮಂಟಪವಿದೆ. ಇವರು ಹೇಳುವ ಪ್ರಕಾರ ಇದು ದೊಡ್ಡವೀರ ರಾಜೇಂದ್ರರ ತಂಗಿಯ ವಿವಾಹ ಮಂಟಪವೆಂದು  ಹೇಳಿದರು. ಆದರೆ ನಾನು ಗೂಗಲ್ನಲ್ಲಿ ಜಾಲಾಡಿದಾಗ ದೊಡ್ಡವೀರ ರಾಜೇಂದ್ರರ ಮದುವೆ ಮಂಟಪವೆಂದು ತಿಳಿದು ಬರುತ್ತದೆ. ಈ ಮಂಟಪಕ್ಕೆ ನಾಲ್ಕು ಪ್ರವೇಶ ದ್ವಾರಗಳಿದ್ದು ಮೇಲ್ಬಾಗದಲ್ಲಿ ನಾಲ್ಕು ದಿಕ್ಕಿಗ...

ಬಿರ್ಲಾ ದೇವಸ್ಥಾನ ಕೋಲ್ಕತಾ.

  ಬೆಳಗ್ಗೆನೇ ನಿತ್ಯ ದಿನಚರಿಗಳನ್ನು ಮುಗಿಸಿ, ಕ್ಯಾಮೆರಾ ಬ್ಯಾಗ್ ಎತ್ತಿಕೊಂಡು ಕಂಟೋನ್ಮೆಂಟ್ ನಿಂದ ಹೊರಗೆ ಬಂದೆ. ಅಲ್ಲಿಂದ ಸೀದಾ ಬಂದವ ಪ್ರತಿ ರಜೆಯ ದಿನ ಚಾ ಕುಡಿವ ಸ್ಥಳಕ್ಕೆ ಬಂದು, ಒಂದು ಚಹಾದ ಜೊತೆಗೆ ಹೂಗ್ಲಿ ನದಿಯ ಹರಿವನ್ನು ನೋಡುತ್ತಾ  ಇವತ್ತು  ಎಲ್ಲಿಗೆ ಹೋಗೋದು ಎಂದು ಯೋಚಿಸುತ್ತಾ ಗೂಗಲ್ ಮಾಡಿದಾಗ ಮೊದಲೇ Note ಮಾಡಿಟ್ಟುಕೊಂಡಿದ್ದ ಬಿರ್ಲಾ ಮಂದಿರ ಕಾಣಿಸಿತು. ನಾನಿದ್ದ ಸ್ಥಳದಿಂದ ನಡೆದುಕೊಂಡು ಹೋಗಲು ಎಷ್ಟು ಕಿಮೀ ಇದೆ ಎಂದು ಹುಡುಕಿದಾಗ 8 ಕಿಮೀ ತೋರಿಸಿತು. ಅಲ್ಲಿಂದ ಸೀದಾ ವೇಗವಾಗಿ ಹೆಜ್ಜೆ ಯ ಮೇಲೊಂದು ಹೆಜ್ಜೆ  ಹಾಕುತ್ತಾ ಹೊರಟೆ. ಯಾಕಂದ್ರೆ 11ಕ್ಕೆ ದೇವಸ್ಥಾನ ಕ್ಲೋಸ್ ಆಗುತ್ತೆ ಎನ್ನುವ ಮಾಹಿತಿ ಕೂಡ ಗೂಗಲ್ ನಲ್ಲಿ ತೋರಿಸ್ತಾ ಇತ್ತು. ಇನ್ನು ನನ್ಯಾವತ್ತು ಸುತ್ತಾಡಲು ಪ್ರಾಥಮಿಕವಾಗಿ ಆಯ್ಕೆ ಮಾಡುವ ಸ್ಥಳ ಯಾವುದೆಂದರೆ, ನಮಗೆ ನಡೆದುಕೊಂಡು ಹೋಗಲು ಸಾಧ್ಯವಿರುವಂತಹ ಸ್ಥಳಗಳು, ಯಾಕಂದ್ರೆ ನಡೆದುಕೊಂಡು ಹೋಗುವಾಗ ನಮಗೆ ಬೇಕಾದ ಹಾಗೆ ಫೋಟೋವನ್ನು ಸೆರೆ ಹಿಡಿಯಬಹುದು ಹಾಗೂ ಏಕಾಂಗಿಯಾಗಿ ನಡೆದುಕೊಂಡು ಹೋಗುವ ಒಂದು ಮಜನೆ ಇದ್ಯಾಲ್ವ ಅದೊಂದು ನಶೆನೆ ಬೇರೆ ಮರ್ರೆ. ಅಂತೂ 10 ಗಂಟೆ ಆಗುವಷ್ಟರಲ್ಲಿ ಬಿರ್ಲಾ ಮಂದಿರಕ್ಕೆ ತಲುಪಿದೆ. ಮೊದಲನೆಯದಾಗಿ ಅಲ್ಲಿನ ಸಿಬ್ಬಂದಿ ನಗು ಮೊಗದೊಂದಿಗೆ ಸ್ವಾಗತಿಸಿದರೆ ಎರಡನೆಯದಾಗಿ ಇಲ್ಲಿ "ಯಾವುದೇ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿಯಲು ಅವಕಾಶ ಇಲ್ಲ" ಎಂದರು. ಇನ್ನು...