ನಮ್ಮ ತರಗತಿಯ ಕೆಲವು ಸ್ನೇಹಿತರಲ್ಲಿ ಕುಮಾರ ಪರ್ವತಕ್ಕೆ ಚಾರಣ ಹೋಗುವ ಬಗ್ಗೆ ಒಂದೆರಡು ಸಲ ಮಾತಾಡಿಯಾಗಿತ್ತು, ಪ್ಲಾನ್ ಮಾಡಿ ಚಾರಣಕ್ಕೆ ಹೋಗಲು ದಿನಾಂಕ ಕೂಡ ನಿಗದಿಪಡಿಸಿಯಾಗಿತ್ತು. ಆದರೆ ಚಾರಣಕ್ಕೆ ಹೋಗುವ ದಿನ ಹತ್ತಿರವಾದಂತೆ ಒಬ್ಬಬ್ಬೊಬ್ಬರು ಒಂದೊಂದು ಕುಂಟು ನೆಪ ಹೇಳಿ ಜಾರಿಕೊಂಡರು. ಕೊನೆಗೆ ಆ ಪ್ಲಾನ್'ನ್ನು ಅಲ್ಲೇ ಬಿಡಬೇಕಾಯಿತು. ಮೊನ್ನೆಯೊಂದು ದಿನ NCCಯಲ್ಲಿ ಪರಿಚಯವಾದ ಸೀನಿಯರ್ ಗಳಿಬ್ಬರು ಬಂದು, ಕುಮಾರ ಪರ್ವತಕ್ಕೆ ಹೋಗುವ ಬಗ್ಗೆ ಆಸಕ್ತಿ ಹೇಳಿಕೊಂಡರು. ರೋಗಿ ಬಯಸಿದ್ದು ಹಾಲನ್ನು ವೈದ್ಯರು ನೀಡಿದ್ದು ಹಾಲನ್ನೇ ಎಂಬಂತೆ ನನಗೆ ಬಹಳ ಖುಷಿಯಾಯಿತು. ಅಂತೆಯೇ ಸಡನ್ಆಗಿ ಪ್ಲಾನ್ ಮಾಡಿ ಶನಿವಾರ ಹೋಗುವುದೆಂದು ಮೂವರು ಸೇರಿ ತೀರ್ಮಾನಿಸಿದೆವು. ಹೋ ನಿಮಿಗೆಲ್ಲ ನನ್ನ ಸೀನಿಯರ್'ಗಳೆಂದರೆ ಯಾರಂತ ಗೊತ್ತಿಲ್ಲ ಅಲ್ವಾ!? ಹಾಗದ್ರೆ ಕೇಳಿ, ಒಬ್ರು ಅಂತಿಮ ಬಿ.ಎ. ಯಾ ಕುಸುಮಧರ್ ಹಾಗೂ ಇನ್ನೊಬ್ರು ಅಂತಿಮ ವರ್ಷ ಬಿ.ಕಾಂ. ನ ಪ್ರದೀಪ್. ಒಂದು ದಿನ ಉಳಿದುಕೊಳ್ಳಲು ಬೇಕಾಗುವಷ್ಟು ಬಟ್ಟೆ ಬರೆಗಳನ್ನು ಬ್ಯಾಗ್'ನಲ್ಲಿ ತುಂಬಿಸಿ, ಶನಿವಾರ ಒಂದು ದಿನ ಕಾಲೇಜುಗೆ ರಜೆ ಹಾಕಿ ಸುಬ್ರಹ್ಮಣ್ಯದತ್ತ ಪಯಣ ಬೆಳೆಸಿದೆವು. ಸುಬ್ರಹ್ಮಣ್ಯಕ್ಕೆ ಸುಮಾರು11:00ಗಂಟೆಗೆ ತಲುಪಿದೆವು. ಆದಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಒ...