ಒಂದು ದಿನದ ಹಿಂದೆಯಷ್ಟೇ ಸೆಮ್ ಎಕ್ಸಾಮ್'ಗಳೆಲ್ಲ ಮುಗಿದಿತ್ತು. ಮರುದಿನ ಲೈಬ್ರೆರಿಯಾ ಪುಸ್ತಕಗಳನ್ನು ಕೊಡಲು ಕಾಲೇಜುಗೆ ಹೋಗಿದ್ದೆ. ಅಲ್ಲಿಗೆ ಮೋಹನ್ ಕೂಡ ಅವನ ಬೈಕ್'ನಲ್ಲಿ ಬಂದ. ಹಿಂದಿನ ದಿನವೇ ದಿಡುಪೆಗೆ ಒಂದು ರೌಂಡ್ ಬೈಕ್ನಲ್ಲಿ ಹೋಗಿ ಬರೋಣ, ಎಂದು ಅಂತಿಮ ವರ್ಷದ ಹಮೀದ್'ರವರು ಗೌಡ್ರಂತೆ ಕಿವಿ ಮಾತು ಹೇಳಿದ್ರು. ಜೊತೆಗೆ ಮೋಹನ ಕೂಡ ಹೋಗುವ ಬಗ್ಗೆ ಉತ್ಸಾಹ ತೋರಿದ್ದ. ಆದರೆ ನಾನು ಅಷ್ಟೊಂದು ಉತ್ಸಾಹ ತೋರಿರಲಿಲ್ಲ. ಯಾಕೆಂದರೆ ನಮ್ಮ ಮೋಹನ ಇದ್ದನಲ್ಲ, ಅವ ಪ್ಲಾನ್ ಹಾಕುವಾಗ ಬರುತ್ತೇನೆ ಅಂದ್ರೆ ಹೊರಡುವ ದಿನ ಏನಾದ್ರು ಸಮಸ್ಯೆ ಹೇಳಿ ನಿರಾಸೆ ಮೂಡಿಸುವುದೆಂದರೆ ಅವನಿಗೆ ಪುಣ್ಯದ ಕೆಲಸ!! ಅಷ್ಟೋತ್ತಿಗೆ ಹಮೀದ್ ಕರೆ ಮಾಡಿ "ಬೆಳ್ತಂಗಡಿಯಲ್ಲಿ ಹಾಜರಿಯಾಗಿದ್ದೇನೆ" ಎಂದರು. ಇತ್ತೀಚಿಗೆ ರಸ್ತೆಯ ತಿರುವುಗಳೆಲ್ಲ ಪೊಲೀಸರ ತಾಣವೇ ಆಗಿದುದ್ದರಿಂದ ಹೆಲ್ಮೆಟ್ ಇಲ್ಲದ ಬೈಕ್ ಸವಾರಿ ಕಳ್ಳ ಬೆಕ್ಕಿನಂತೆ ಹೋಗುವ ಆಗೆ ಆಗಿತ್ತು. ಅದಕ್ಕೆ ಮೋಹನನಿಗೆ "ಒಂದು ಹೆಲ್ಮೆಟ್ ತೆಗೆದುಕೋ" ಎಂದು ಕಿವಿಮಾತು ಹೇಳಿದೆ. ಎರಡು ಬೈಕ್'ನಲ್ಲಿ ನಾಲ್ಕು ಜನ ಭರ್ತಿಯಾಗ್ಬೇಕಲ್ವಾ, ಅದ್ಕೆ ನಮ್ಮ ತರಗತಿಯ Rep ಜಯರಾಮ ಸಿಕ್ಕಿದ, "ಬಾ ಮಾರಯಾ ಹೋ ಅಲ್ಲಿವರೆಗೆ ಬೈಕ್ನಲ್ಲಿ ಹೋಗ್ಬರೋಣ" ಎಂದು ಹೇಳಿದೆ. ನಾನು ಹಮೀದ್'ರವರ ಬೈಕ್'ನಲ್ಲಿ ಜಯರಾಮ ಮೋಹನನ ಬೈಕ್ ನಲ್ಲಿ ಹೊರಟೆವು. ...