Skip to main content

ಹಾಸ್ಟೆಲ್ ನೆನಪು

ಹಾಸ್ಟೆಲ್ ನೆನಪು...

ಗದ್ದೆ, ತೋಟ, ಕಾಡು, ಹಳ್ಳ, ನಾಯಿ, ದನ ಆಟ ಅಂತ ತಿರುಗಾಡುತ್ತಿದ್ದ ಕಾಲದಲ್ಲಿ 6ನೇ ತರಗತಿಗೆ, ನನ್ನನ್ನು ಹಾಸ್ಟೆಲ್'ಗೆ ಎತ್ತಾಕಿದ್ರು, ಮಳೆಗಾಲ ಬೇರೆ, ಕಾರ್ಮೋಡ ಕವಿದಾಗ ಮನೆ, ಮನೆಯವರನ್ನೆಲ್ಲ ನೆನೆದುಕೊಂಡಾಗ ಮನಸ್ಸಲ್ಲಿ ಬೇಡ ಅಂದ್ರು, ಕಣ್ಣಂಚಿನಲ್ಲಿ ನೀರು ಬರುತ್ತಿತ್ತು. ನಮ್ಮನ್ನು ಸಮಾಧಾನ ಮಾಡಲು 7, 8ನೇ ತರಗತಿಯವರು "ಲೋ ಯಾಕೋ ಅಳ್ತಿಯಾ, ನಾವೆಲ್ಲ ಇಲ್ವಾ ಇಲ್ಲಿ, ಎಲ್ಲ ಸರಿಯಾಗುತ್ತೆ ಇನ್ನೊಂದೆರಡು ತಿಂಗಳು ಅಷ್ಟೇ" ಎಂದು ಹೇಳುತ್ತ ಸಮಾಧಾನ ಮಾಡುತ್ತಿದ್ದರು. ನನಗಂತೂ ಈ ಹಾಸ್ಟೇಲ್ ಜೀವನ Ristrict ನ ಒಳಗೆ ಬದುಕಬೇಕಾದ್ದರಿಂದ ಜೈಲ್'ನಲ್ಲಿ ಹಾಕಿದಂತಾಗಿತ್ತು. ಇದಕ್ಕೆಲ್ಲ ಕುಮ್ಮಕ್ಕು ಕೊಡುವಂತೆ 9,10ನೆಯವರ ಹವಾ ಬೇರೆ ಕೇಡು!.
ಒಂದು ವರ್ಷ ಹೇಗೋ ತೆಪ್ಪಾಗೆನೆ ಕಳೆದುಹೋಯಿತು.
7ನೇ ತರಗತಿಗೆ ಬಂದಾಗ ಹಾಸ್ಟೆಲ್ ಸಿಬ್ಬಂದಿಯ ಕಣ್ತಪ್ಪಿಸಿ
ಒಂದು ಚಾಕ್ಲೆಟ್'ನ ಆಸೆಗೆ ಕದ್ದು ಅಂಗಡಿಗೆ ಹೋಗಲು ದೈರ್ಯವಿಲ್ಲದವರಿಗೆ ತಿಂಡಿ supply ಮಾಡೋದು. ಹೀಗೆ ಮೆಲ್ಲನೆ ಧೈರ್ಯ ಅನ್ನೋದು ಚಿಗುರಿತು.
ಈಗೇನೆ ಮಳೆಗಾಲದ ಸಮಯ mostly ಆಟಿ(ಆಷಾಢ) ತಿಂಗಳು ಅನಿಸುತ್ತೆ, ಹಾಸ್ಟೆಲ್ನಲ್ಲಿ ಹೊಟ್ಟೆ ತಣ್ಣಗಾಗುವಷ್ಟು ಎಲ್ಲ ಸೌಕರ್ಯವಿದ್ದರು ಮತ್ತಿನ್ನೇನೋಬೇಕೆಂಬ ಹಂಬಲ.
ಅಂತೆಯೇ ರವಿವಾರದ ಬೆಳಗ್ಗಿನ ಗಂಜಿ ಊಟ ಮುಗಿಸಿ ನಮ್ಮ ಮೇಲಿನ ಮಹಡಿಯಿಂದ ಎಡಬಿಡದೆ ಸುರಿಯುತ್ತಿದ್ದ ಮಳೆ ಹನಿಗಳನ್ನೇ ನೋಡುತ್ತಿದ್ದವರಿಗೆ ಹಲಸಿನ ಹಣ್ಣು ತಿನ್ನಬೇಕೆಂಬ ಆಸೆಯಾಯಿತು. ಹಾಸ್ಟೆಲ್ನ ಕೆಲವೊಂದು ಸೂಕ್ಷ್ಮ ಕಣ್ಣುಗಳನ್ನು ಹಾಗೂ ಕೆಲವು ಚಾಡಿಕೊರ ಹುಡುಗರ ಕಣ್ಣನ್ನು ತಪ್ಪಿಸಿ ಹಾಸ್ಟೆಲ್ನ ಬೇಲಿಯನ್ನು  ಭೇದಿಸಿ ಕಾನರ್ಪದ ರಸ್ತೆಯಲ್ಲಿ ನಾಲ್ವರು ಹೆಜ್ಜೆ ಹಾಕಿದೆವು.
ನಾನು ರಕ್ಷಿತ್ ಹಾಗೂ ಇನ್ನಿಬ್ಬರು ಬಯಲು ಸೀಮೆಯವರು, ಸುಮಾರು ಒಂದು ಕಿಲೋಮೀಟರ್ ಮುಂದೆ ಸಾಗಿ ಕುರುಡ್ಯ ಬಸ್ಟ್ಯಾಂಡ್'ನ ಹತ್ತಿರ ಒಳ ರಸ್ತೆಯಲ್ಲಿ ನಡೆದುಕೊಂಡು ಹೋದೆವು. ಯಾವ ಮನೆಯವರ ಪರಿಚಯ ಕೂಡ ನಮಗಿಲ್ಲ. ಹಿಂಜರಿಕೆಯಿಂದಲೇ ಹೋಗಿ ಒಂದು ಮನೆಯಲ್ಲಿ "ಹಲಸಿನ ಹಣ್ಣು ಸಿಗಬಹುದೇ" ಎಂದು ಕೇಳಿದೆವು. ನಮ್ಮನ್ನು ಸಂಶಯದಿಂದಲೇ ನೋಡಿ "ಇಲ್ಲ" ಎಂಬ ಉತ್ತರದೊಂದಿಗೆ ಕಳುಹಿಸಿದರು. ಮತ್ತೊಂದು ಮನೆಯಲ್ಲಿ ಕೇಳಿದೆವು. ಆ ಮನೆಯವರು ಮಾತ್ರ ನಗುತ್ತಲೇ ಮನೆಯ ಹಿಂಬಂದಿಯಲ್ಲಿರುವ ಹಲಸಿನ ಮರಕ್ಕೆ ಹತ್ತಿ ಒಬ್ಬನಿಗೆ ಹೊತ್ತುಕೊಂಡು ಹೋಗಲು ಕಷ್ಟ ಆಗುವಷ್ಟು ದೊಡ್ಡ ಹಲಸಿನ ಹಣ್ಣನ್ನು ನೀಡಿದರು.

ನಮ್ಮ ಮೊಗದಲ್ಲಿ colgate ಜಾಹಿರಾತು!.
"ನೀವು ಎಲ್ಲಿಯವರು?" ಎಂದು ಕೇಳಿದರು. ನಾವು ಹಾಸ್ಟೆಲ್'ನವರು ಎಂದು ಮಾತ್ರ ಹೇಳಲಿಲ್ಲ. "ನಾವು ಇಲ್ಲೇ ದೇವಿಗುಡಿಯವರು" ಎಂದು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದೆವು.
ಈಗ ಅನಿಸುತ್ತಿದೆ, ನಮ್ಮ ವೇಷ ಭೂಷಣ ನೋಡಿ ಅವತ್ತು ಅವರಿಗೆ ಖಂಡಿತ ನಾವು ಹಾಸ್ಟೆಲ್ ನವರು ಎಂದು ಗೊತ್ತಾಗಿರಬಹುದು!!.
ಅಷ್ಟು ದೊಡ್ಡ ಹಲಸಿನ ಹಣ್ಣನ್ನು ನಾಲ್ಕು ಜನ ಒಬ್ಬ ಸುಸ್ತಾದಗ ಇನ್ನೊಬ್ಬ ಹೆಗಲು ಕೊಡುತ್ತ ಎತ್ತಿಕೊಂಡು ಬಂದೆವು. ಯಾಕೆಂದರೆ ಅವಾಗಿನ ವಯಸ್ಸಿಗೆ, ಹಾಗೂ ಶಕ್ತಿಗೆ ಹಲಸಿನ ಹಣ್ಣಿನ ಗಾತ್ರ ಮೀರಿಸಿತ್ತು!. ಹಲಸಿನ ಹಣ್ಣೆನೋ ಸಿಕ್ಕಿತು. ಆದರೆ ಅದನ್ನು ಹೇಗೆ ಕುಯ್ದು ಭಾಗ ಮಾಡೋದು, ಅತ್ತ ಹಾಸ್ಟೆಲ್'ಗೆ ತೆಗೆದುಕೊಂಡು ಹೋಗುವ ಹಾಗೆನು ಇಲ್ಲ. ಇತ್ತ ಇದನ್ನು ಹೇಗೆ ಕುಯ್ಯೊದು ಎಂದು ತಲೆ ಕೇರ್ಕೊಳ್ಳುವ ಆಗೆ ಆಯಿತು. ಅಲ್ಲೇ ಬಸ್ಟ್ಯಾಂಡ್ ಹತ್ತಿರ ನಿರ್ಜನ ಪ್ರದೇಶದಲ್ಲಿ ಹಲಸಿನ ಹಣ್ಣನ್ನು, ಒಬ್ಬೊಬ್ಬರ ಸಾಹಸ ಪ್ರದರ್ಶನದಂತೆ ಕಲ್ಲಿನ ಮೇಲೆ ಎತ್ತಿ ಹಾಕಿದೆವು. ಹಲಸಿನ ಹಣ್ಣು 'ತುಳುವೇ' ತಳಿಯಾಗಿದ್ದರೆ ಸುಲಭದಲ್ಲಿ ಭಾಗ ಮಾಡಬಹುದಿತ್ತು. ಆದರೆ ಇದು 'ಬರ್ಕೆ' (ಕನ್ನಡದಲ್ಲಿ ಬೇರೆ ಹೆಸರು ಇರಬಹುದು) ತಳಿಯದ್ದರಿಂದ ಹಾಗೇನೇ, ಇದು ಹೆಚ್ಚು ಹಣ್ಣು ಅಲ್ಲ ಇತ್ತ ಕಾಯಿಯು ಅಲ್ಲ ಎನ್ನುವ ಸ್ಥಿತಿಯಲ್ಲಿದ್ದುದ್ದರಿಂದ ಎರಡು ತೊಳೆ ಹಣ್ಣನ್ನು ತಿನ್ನಬೇಕಾದರೆ ಹರಸಾಹಸನೇ ಮಾಡಬೇಕಾಯಿತು. ಕಲ್ಲಿನ ಮೇಲೆ ಎತ್ತಿ ಹಾಕಿದ್ದ ಪರಿಣಾಮ  ಹಣ್ಣು ನಜ್ಜುಗುಜ್ಜಾಗಿತ್ತು. ಅಷ್ಟೆಲ್ಲ ಕಷ್ಟಪಟ್ಟ ಪರಿಣಾಮವೋ   ಅಥವಾ ಅಪರೂಪಕ್ಕೆ ನಾಲಗೆಗೆ ಸ್ಪರ್ಶಿಸಿದ ಪರಿಣಾಮವೋ ಏನೋ!. ತುಂಬಾ ರುಚಿಯಾಗಿತ್ತು. ಈ ಸಾಹಸದ ನಡುವೆ ನಾಲ್ವರು ಕೂಡ ಮಳೆಗೆ ಚೆನ್ನಾಗಿ ನೆನೆದು ಹೋಗಿದ್ದೆವು. ಆಗಲೇ ಸೂರ್ಯ ನೆತ್ತಿಯ ಮೇಲೆ ಆಗೊಮ್ಮೆ ಈಗೊಮ್ಮೆ ಮೋಡಗಳ ಮರೆಯಲ್ಲಿ ಇಣುಕುತ್ತಿದ್ದ. ನಾವು ಮೆಲ್ಲಗೆ ತಂತಿ ಬೇಲಿಯನ್ನು ಸರಿಸಿ ಯಾರಿಗೂ ಸಂಶಯ ಬಾರದಂತೆ ಇಲಿಗಳು ಜಾಗ್ರತೆಯಾಗಿ ಬಿಲ ಸೇರಿದಂತೆ ಹಾಸ್ಟೆಲ್ ಸೇರಿಕೊಂಡೆವು.

(ಧೋ ಎಂದು ಸುರಿಯುತ್ತಿದ್ದ ಮಳೆಯ ಹನಿಯನ್ನು ನೋಡುತ್ತಿದ್ದಾಗ  ಇಷ್ಟೆಲ್ಲ Flashback ನೆನಪಾಯಿತು.)
#HostelLife

Comments

Popular posts from this blog

ಬಂಡಾಜೆಯ ಹಾದಿ

               ===== ಬಂಡಾಜೆಯ ಹಾದಿ ===== ಮುಂಡಾಜೆ ಹಾಸ್ಟೆಲ್ನಲ್ಲಿ ಇರುವಾಗಲೇ ನನಿಗೆ ಬಂಡಾಜೆಗೊಮ್ಮೆ ಹೋಗ್ಬೇಕು ಎಂಬ ಆಸೆ ಮೂಡಿತ್ತು.(ಎಂಟು ವರ್ಷದ ಹಿಂದೆ)ಯಾಕೆಂದರೆ ಬೆಳ್ಳಿಯ ಹೊಳಪಿನಿಂದ ವಯ್ಯಾರದಿಂದ ಮೇಲಿಂದ ಜಿಗಿಯುವುದು ನಮ್ಮ ಹಾಸ್ಟೆಲ್ಗೆ ಕಾಣುವಷ್ಟು ಅಂದವಾಗಿ ಬೇರೆಲ್ಲಿಯೂ ಕಾಣಿಸೋದಿಲ್ಲ ಅನಿಸುತ್ತೆ. ಮೊನ್ನೆ ಎಕ್ಸಾಮ್ ಮುಗಿದ ಮೇಲೆ ಎಲ್ಲಿಗಾದರು ಹೋಗಬೇಕು ಎಂದು ಅನಿಸಿದಾಗಲೇ ಬಂಡಾಜೆಗೆ ಹೋಗೋಣವೆನಿಸಿತು. ಒಂದೈದು ಜನಕ್ಕೆ ಕರೆಮಾಡಿ ಕೊನೆಗೆ ಹಮೀದ್, ರಕ್ಷಿತ್ ಸಿಕ್ಕರು. ಎರಡು ಬೈಕಿನಲ್ಲಿ ಬೆಳಗ್ಗೆ 8 ಗಂಟೆಗೆನೆ ಬ್ಯಾಗ್'ಗೆ ನೀರು, ಬಿಸ್ಕೆಟ್ ಪ್ಯಾಕೇಟ್ಗಳನ್ನು ತುಂಬಿಕೊಂಡು, ನಾವು ಮೂವರು ಬಂಡಾಜೆಯ ತಣ್ಣನೆಯ ನೀರನ್ನು ಸ್ಪರ್ಶಿಸಲು ಹಾತೊರೆಯುತ್ತ ಹೊರಟೆವು. ಪಶ್ಚಿಮ ಘಟ್ಟದ ಬುಡಕ್ಕೆ ಹೋಗಿ ಬಂಡಾಜೆಯ ತುತ್ತಾ ತುದಿಗೆರಲು ಅರಣ್ಯ ಇಲಾಖೆಗೆ ಸಂಬಂಧಿಸಿದವರ ಅನುಮತಿಯನ್ನು ಪಡೆದುಕೊಂಡು ಪ್ರಶಾಂತವಾಗಿದ್ದ ಕಾಡೊಳಗೆ ಹೆಜ್ಜೆ ಹಾಕಿದೆವು. ದಾರಿ ತುಂಬಾ ತರೆಗೆಲೆ ಹರಡಿದ್ದರಿಂದ ಪ್ರತಿ ಹೆಜ್ಜೆ ಕೂಡ ಕಾಡಿನ ನಿಶಬ್ಧತೆಗೆ ಭಂಗ ತರುವಂತಿತ್ತು. ಆಗ ತಾನೇ ಮೇಲೇರುತ್ತಿದ್ದ ಸೂರ್ಯ ಕಾಡೊಳಗಿನ brightnessನ್ನು ಹೆಚ್ಚಿಸಲು ಮರಗಳ ಚಪ್ಪರದೊಂದಿಗೆ ಸೆಣಸುತ್ತ ಲಗ್ಗೆ ಇಡುತ್ತಿದ್ದ. ನಾವು ಮಾತ್ರ ಲೋಕದ ಚಿಂತೆಗಳೆಲ್ಲವನ್ನು ಬಿಟ್ಟು ಕಾಲಿ...

ತಡಿಯಂಡಮೊಳ್ ಚಾರಣ ಭಾಗ -2, ನಾಲ್ನಾಡು ಅರಮನೆ.

ತಡಿಯಂಡಮೊಳ್ ಚಾರಣ ಭಾಗ -2, ನಾಲ್ನಾಡು ಅರಮನೆ.           ಅರಮನೆಯನ್ನು ನೋಡಿಕೊಳ್ಳುವವರು ನಮ್ಮನ್ನೋಡಿ ವೇಗವಾಗಿ ಧಾವಿಸಿ ನಗುಮೊಗದಿಂದಲೇ ಸ್ವಾಗತಿಸಿದರು. ಅಂದಾ ಹಾಗೆ, ಈ ನಾಲ್ನಾಡು ಅರಮನೆಯ ನಿರ್ಮಾಣದ ಕುರಿತು ಇತಿಹಾಸವನ್ನು ಹುಡುಕುತ್ತ ಹೋದರೆ, ದೊಡ್ಡವೀರ ರಾಜೇಂದ್ರರು ಶತ್ರುಗಳಿಂದ ತನ್ನ ಕುಟುಂಬವನ್ನು ಕಾಪಾಡಿಕೊಳ್ಳುವ ಸಲುವಾಗಿ ಸೂಕ್ತ ಸ್ಥಳವನ್ನು ಹುಡುಕುತ್ತ ಬಂದಾಗ ಅವರ ಕಣ್ಣಿಗೆ ಬಿದ್ದಿದ್ದು ಈ ಬೆಟ್ಟ ಶ್ರೇಣಿಗಳಿಂದ ಹಾಗೂ ದಟ್ಟವಾದ ಕಾನನದಿಂದ ಸುತ್ತುವರೆದ ಯುವಕಪಾಡಿ ಗ್ರಾಮದಲ್ಲಿರುವ ಈ ಪ್ರದೇಶ. ಈ ಸ್ಥಳದಲ್ಲಿ 1792ರಲ್ಲಿ ಎರಡು ಅಂತಸ್ತಿನ ಸಣ್ಣ ಅರಮನೆಯನ್ನು  ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತೆ. ಅರಮನೆಯನ್ನು ನೋಡಿಕೊಳ್ಳುವವರು, ನಮ್ಮ ಊರಿನ ಬಗ್ಗೆ ಹಾಗೂ ನಮ್ಮ ಪರಿಚಯ ಮಾಡಿಕೊಳ್ಳುತ್ತಾ, ಅರಮನೆಯ ಬಗ್ಗೆ ಮಾಹಿತಿಯನ್ನು ನೀಡುತ್ತಾ ಅರಮನೆಯೊಳಗೆ ಹೆಜ್ಜೆ ಹಾಕಿದರು. ನಾವು ಅವರನ್ನು ಹಿಂಬಾಲಿಸುತ್ತಾ ಮುಖ್ಯ ದ್ವಾರವನ್ನು ದಾಟಿ ಅರಮನೆಯೊಳಗೆ ಹೋದಾಗ ಬಲ ಬದಿಯಲ್ಲಿ ಒಂದು ಮಂಟಪವಿದೆ. ಇವರು ಹೇಳುವ ಪ್ರಕಾರ ಇದು ದೊಡ್ಡವೀರ ರಾಜೇಂದ್ರರ ತಂಗಿಯ ವಿವಾಹ ಮಂಟಪವೆಂದು  ಹೇಳಿದರು. ಆದರೆ ನಾನು ಗೂಗಲ್ನಲ್ಲಿ ಜಾಲಾಡಿದಾಗ ದೊಡ್ಡವೀರ ರಾಜೇಂದ್ರರ ಮದುವೆ ಮಂಟಪವೆಂದು ತಿಳಿದು ಬರುತ್ತದೆ. ಈ ಮಂಟಪಕ್ಕೆ ನಾಲ್ಕು ಪ್ರವೇಶ ದ್ವಾರಗಳಿದ್ದು ಮೇಲ್ಬಾಗದಲ್ಲಿ ನಾಲ್ಕು ದಿಕ್ಕಿಗ...

ಬಿರ್ಲಾ ದೇವಸ್ಥಾನ ಕೋಲ್ಕತಾ.

  ಬೆಳಗ್ಗೆನೇ ನಿತ್ಯ ದಿನಚರಿಗಳನ್ನು ಮುಗಿಸಿ, ಕ್ಯಾಮೆರಾ ಬ್ಯಾಗ್ ಎತ್ತಿಕೊಂಡು ಕಂಟೋನ್ಮೆಂಟ್ ನಿಂದ ಹೊರಗೆ ಬಂದೆ. ಅಲ್ಲಿಂದ ಸೀದಾ ಬಂದವ ಪ್ರತಿ ರಜೆಯ ದಿನ ಚಾ ಕುಡಿವ ಸ್ಥಳಕ್ಕೆ ಬಂದು, ಒಂದು ಚಹಾದ ಜೊತೆಗೆ ಹೂಗ್ಲಿ ನದಿಯ ಹರಿವನ್ನು ನೋಡುತ್ತಾ  ಇವತ್ತು  ಎಲ್ಲಿಗೆ ಹೋಗೋದು ಎಂದು ಯೋಚಿಸುತ್ತಾ ಗೂಗಲ್ ಮಾಡಿದಾಗ ಮೊದಲೇ Note ಮಾಡಿಟ್ಟುಕೊಂಡಿದ್ದ ಬಿರ್ಲಾ ಮಂದಿರ ಕಾಣಿಸಿತು. ನಾನಿದ್ದ ಸ್ಥಳದಿಂದ ನಡೆದುಕೊಂಡು ಹೋಗಲು ಎಷ್ಟು ಕಿಮೀ ಇದೆ ಎಂದು ಹುಡುಕಿದಾಗ 8 ಕಿಮೀ ತೋರಿಸಿತು. ಅಲ್ಲಿಂದ ಸೀದಾ ವೇಗವಾಗಿ ಹೆಜ್ಜೆ ಯ ಮೇಲೊಂದು ಹೆಜ್ಜೆ  ಹಾಕುತ್ತಾ ಹೊರಟೆ. ಯಾಕಂದ್ರೆ 11ಕ್ಕೆ ದೇವಸ್ಥಾನ ಕ್ಲೋಸ್ ಆಗುತ್ತೆ ಎನ್ನುವ ಮಾಹಿತಿ ಕೂಡ ಗೂಗಲ್ ನಲ್ಲಿ ತೋರಿಸ್ತಾ ಇತ್ತು. ಇನ್ನು ನನ್ಯಾವತ್ತು ಸುತ್ತಾಡಲು ಪ್ರಾಥಮಿಕವಾಗಿ ಆಯ್ಕೆ ಮಾಡುವ ಸ್ಥಳ ಯಾವುದೆಂದರೆ, ನಮಗೆ ನಡೆದುಕೊಂಡು ಹೋಗಲು ಸಾಧ್ಯವಿರುವಂತಹ ಸ್ಥಳಗಳು, ಯಾಕಂದ್ರೆ ನಡೆದುಕೊಂಡು ಹೋಗುವಾಗ ನಮಗೆ ಬೇಕಾದ ಹಾಗೆ ಫೋಟೋವನ್ನು ಸೆರೆ ಹಿಡಿಯಬಹುದು ಹಾಗೂ ಏಕಾಂಗಿಯಾಗಿ ನಡೆದುಕೊಂಡು ಹೋಗುವ ಒಂದು ಮಜನೆ ಇದ್ಯಾಲ್ವ ಅದೊಂದು ನಶೆನೆ ಬೇರೆ ಮರ್ರೆ. ಅಂತೂ 10 ಗಂಟೆ ಆಗುವಷ್ಟರಲ್ಲಿ ಬಿರ್ಲಾ ಮಂದಿರಕ್ಕೆ ತಲುಪಿದೆ. ಮೊದಲನೆಯದಾಗಿ ಅಲ್ಲಿನ ಸಿಬ್ಬಂದಿ ನಗು ಮೊಗದೊಂದಿಗೆ ಸ್ವಾಗತಿಸಿದರೆ ಎರಡನೆಯದಾಗಿ ಇಲ್ಲಿ "ಯಾವುದೇ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿಯಲು ಅವಕಾಶ ಇಲ್ಲ" ಎಂದರು. ಇನ್ನು...