Skip to main content

ಸೈಕಲ್ ಸವಾರಿಪುದುವೆಟ್ಟು to ಶಿಶಿಲ

 ಸೈಕಲ್ ಸವಾರಿ

ಪುದುವೆಟ್ಟು to ಶಿಶಿಲ

     ಕುಮಾರಪರ್ವತ ಚಾರಣ ಹಾಗೂ ಶಿಶಿಲೇಶ್ವರ ದೇವಸ್ಥಾನಕ್ಕೆ ಸೈಕಲ್'ನಲ್ಲಿ ಹೋಗುವ ಪ್ಲಾನ್ sem ಎಕ್ಸಾಮ್ ಪ್ರಾರಂಭವಾಗುವ ಮೊದಲೇ ನಾಲ್ಕು ಜನ ಜೊತೆ ಸೇರಿ ತೀರ್ಮಾಣವಾಗಿತ್ತು. ಎಕ್ಸಾಮ್ ಮುಗಿದು ರಜೆಯಲ್ಲಿ ಒಂದುವಾರ ಕೆಲಸಕ್ಕೆ ಹೋಗಿದ್ದ ದುಡ್ಡನ್ನು ಎತ್ಕೊಂಡು ಹೋಗುವುದೇ ಎಂದು ನಾನು ತಯಾರಾಗಿದ್ದೆ. ಅಂತೆಯೇ ಕುಮಾರ ಪರ್ವತ ಚಾರಣಕ್ಕೆ  ಒಂದು ದಿನ ಫಿಕ್ಸ್ ಮಾಡಿದ್ದೇವು. ಈ ಮೂವರು ಗೆಳೆಯರ ಉತ್ಸಾಹ ನೋಡಿ ಈ ಸಲ ಟ್ರೆಕ್ಕಿಂಗ್ ತುಂಬಾ ಆಡ್ವೆಂಚರ್ ಆಗಿ ಇರಬಹುದು ಎಂದು ಅಂದುಕೊಳ್ಳುತ್ತಾ  ಒಳಗೊಳಗೇ ಖುಷಿಯಯಾಯಿತು. ಇನ್ನೇನು ಹೊರಡುವ ಮುನ್ನ ದಿನ ಇಬ್ಬರು ಒಂದೊಂದು ಡಬ್ಬಾ ಕತೆ ಕಟ್ಟಿ ಇಬ್ರು ಬರೋದಿಕ್ಕೆ ಆಗೋದಿಲ್ಲ ಎಂದು ಹೇಳಿ ತಪ್ಪಿಸಿಕೊಂಡ್ರು.  ನನಗೆ ತುಂಬಾ ನಿರಾಸೆಯಾಯಿತು. ಕೊನೆಗೆ  ಆ ಪ್ಲಾನ್'ನ್ನು ಅಲ್ಲೆ ಬಿಡಬೇಕಾಯಿತು. 
ಕೊನೆಗೆ ಶಿಶಿಲಕ್ಕದ್ರೂ ಸೈಕಲ್ ರೈಡ್ ಗಾದರು ಬರ್ತರಾ ಎಂದು ನೋಡಿದೆ ಅದಕ್ಕೂ ಯಾರು ಉತ್ಸಾಹ ತೋರಲಿಲ್ಲ ಕೊನೆಗೆ ನಾನೊಬ್ಬನೇ ಶಿಶಿಲಕ್ಕೆ ಸೈಕಲ್ ನಲ್ಲಿ ಹೋಗಲು ಹೊರಟುನಿಂತೆ.

     ನಮ್ಮ ಊರಿಂದ ಶಿಶಿಲಕ್ಕೆ ಸುಮಾರು 30ರಿಂದ 31 ಕಿ.ಮೀ ದೂರ. ಸೂರ್ಯ ನೆತ್ತಿಗೇರಿ ತನ್ನ ಪ್ರತಾಪವನ್ನು ತೋರಿಸುವ ಮುನ್ನವೇ ದೇವಸ್ಥಾನಕ್ಕೆ ಹೋಗಿ ಮನೆ ಸೇರ್ಕೊಬೇಕು ಎಂಬ ಪ್ಲಾನ್'ನಂತೆ ಬೆಳಗ್ಗೆ 6:45ಕ್ಕೆ ಮನೆಯಿಂದ ಸೈಕಲ್ ಏರಿ ಹೊರಟೆ. ಬೆಳಬೆಳಗ್ಗೆ ಆದುದರಿಂದ ಚಳಿಯ ಪ್ರಭಾವ ತುಸು ಹೆಚ್ಚೇ ಇದ್ದುದರಿಂದ ಬಾಡಿಯೆಲ್ಲ ಗಡಗಡ ವೈಬ್ರೆಟ್ ಆಗುತ್ತಿತ್ತು. ಅರ್ಧ ದಾರಿ ತಲುಪಿದಂತೆ ಸೂರ್ಯ ಮೆಲ್ಲಗೆ ಬಾನಿನಲ್ಲಿ  ಇಣುಕಲು ಆರಂಭಿಸಿದ, ಮುಂದೆ ಸಾಗಿದಂತೆ,
  ನಿರ್ಜನ ಕಾನನ ನೀರವ ಮೌನವನ್ನು ಸೀಳಿಕೊಂಡು ಸಾಗಿರುವ ಶಿಬಾರಜೆ ರಸ್ತೆಯಲ್ಲಿ ಸಾಗಿದರೆ, ಜೊತೆಗೆ ಚುಮ್'ಚುಮ್ ಚಳಿ ಹಾಗೂ ಮಂಜು ಮುಸುಕಿದ ವಾತಾವರಣ ಜೊತೆಗೂಡಿದರೆ ಇನ್ನೇನು  ಸ್ವರ್ಗಕ್ಕೆ ನಾಲ್ಕೇ ಹೆಜ್ಜೆ ಎಂಬ ಹಾಗೆ feel ಆಗುತ್ತಿತ್ತು.
ಈ ರಸ್ತೆಯಲ್ಲಿ ಮರಗಳ ಚಪ್ಪರದ ಜೊತೆಗೆ ಇಳಿಜಾರು ಹಾಗೂ ಏರಿನದ್ದೇ ಹವಾ!, ಈ ರಸ್ತೆಯಲ್ಲಿ ಇಳಿಜಾರು ಎಷ್ಟು ಖುಷಿ ಕೊಡುತ್ತೋ ಏರು ರಸ್ತೆ ಅಷ್ಟೇ ಕಷ್ಟ ಕೊಡುತ್ತಿತ್ತು.
ಇನ್ನು ಈ ರಸ್ತೆಯ ಉದ್ದಕ್ಕೂ ಕಂಡು ಬರುವ ಪ್ರಕೃತಿ ಸೌಂದರ್ಯ ಪದಗಳನ್ನು ಮೀರಿದ್ದು!
ಸುಮಾರು 8:15ಕ್ಕೆ ಶಿಶಿಲೇಶ್ವರ ದೇಗುಲಕ್ಕೆ ತಲುಪಿದೆ. ಶಿಶಿಲೇಶ್ವರ ದೇವಾಲಯದ ಎಡ ಬದಿಯಲ್ಲಿ ಹರಿಯುತ್ತಿರುವ  ಕಪಿಲಾ ನದಿಯಲ್ಲಿ ಪೆರುವೆಲ್ ಮೀನುಗಳ(ದೇವರ ಮೀನು) ಮತ್ಸ್ಯ ತೀರ್ಥವಿದೆ. ಎಲ್ಲಾ ದೇವಸ್ಥಾನಗಳಲ್ಲಿರುವಂತೆ ಈ ದೇವಾಲಯದಲ್ಲಿ ಬಾವಿ ಇರುವುದಿಲ್ಲ.ಈ ಮತ್ಸ್ಯತೀರ್ಥವನ್ನೇ ದೇವರಿಗೆ ಅಭಿಷೇಕ ಮಾಡುವುದು ಇಲ್ಲಿಯ ವೈಶಿಷ್ಟ್ಯ. 
ಇನ್ನು  ಮೂರು ಕಡೆಯಲ್ಲೂ ವನ್ಯ ಸಂಪತ್ತು ತುಂಬಿಕೊಂಡು, ಒಂದು ಕ್ಷಣ ನಮ್ಮನ್ನು ಮೈಮರೆಸುವುದರಲ್ಲಿ ಸಂದೇಹವಿಲ್ಲ.
ದೇವರ ದರ್ಶನ ಪಡೆದ ನಂತರ ಬಹುಕಾಲ ನದಿಯಲ್ಲಿನ ಮೀನುಗಳನ್ನೇ ಮೈಮರೆತು ನೋಡುತ್ತಾ ಹಾಗೂ ಒಂದಷ್ಟು ಅರಳನ್ನು ಮತ್ಸಗಳಿಗೆ ಹಾಕುತ್ತಾ ಸಮಯ ಜಾರಿದ್ದು ಗೊತ್ತಾಗಲೇ ಇಲ್ಲ.
ಒಂದಷ್ಟು ಮೀನುಗಳ ಹಾಗೂ ದೇವಸ್ಥಾನದ ಫೋಟೋವನ್ನು ತೆಗೆದುಕೊಂಡು ಮತ್ತೊಮ್ಮೆ ದೇವರಿಗೆ ಮನದಲ್ಲಿಯೇ ನಮಿಸುತ್ತ ಶಿಶಿಲದಿಂದ 10:00 ಗಂಟೆಗೆ ಊರಿನ ದಾರಿಯ ಕಡೆಗೆ  ಸೈಕಲ್ ಹ್ಯಾಂಡಲ್'ನ್ನು ತಿರುಗಿಸಿದೆ. ರಸ್ತೆಯ ಬದಿಯಲ್ಲಿ ಮರಗಳೇ ತುಂಬಾ ಇದ್ದುದರಿಂದ ಸುಸ್ತು ಅನ್ನೋದು ದೂರದ ಮಾತಗಿತ್ತು. ಸುಮಾರು 11:30ಗೆ ನಾನು ಮನೆಯನ್ನು ತಲುಪಿದೆ. ಎಕ್ಸಾಮ್'ನಿಂದ ಕಂಗೆಟ್ಟಿದ್ದ😜 ಮನಕ್ಕೆ ಈ ಒಂದು ಸೈಕಲ್ ರೈಡ್ ಹಾಗೂ ದೇವರ ದರ್ಶನ ಖುಷಿ ನೀಡಿತು...😍
ಸಾಧ್ಯವಾದರೆ ನೀವು ಶಿಶಿಲೇಶ್ವರ ದೇವಸ್ಥಾನಕ್ಕೆ ಹೋಗಿ ಬನ್ನಿ.

Comments

Popular posts from this blog

ಬಂಡಾಜೆಯ ಹಾದಿ

               ===== ಬಂಡಾಜೆಯ ಹಾದಿ ===== ಮುಂಡಾಜೆ ಹಾಸ್ಟೆಲ್ನಲ್ಲಿ ಇರುವಾಗಲೇ ನನಿಗೆ ಬಂಡಾಜೆಗೊಮ್ಮೆ ಹೋಗ್ಬೇಕು ಎಂಬ ಆಸೆ ಮೂಡಿತ್ತು.(ಎಂಟು ವರ್ಷದ ಹಿಂದೆ)ಯಾಕೆಂದರೆ ಬೆಳ್ಳಿಯ ಹೊಳಪಿನಿಂದ ವಯ್ಯಾರದಿಂದ ಮೇಲಿಂದ ಜಿಗಿಯುವುದು ನಮ್ಮ ಹಾಸ್ಟೆಲ್ಗೆ ಕಾಣುವಷ್ಟು ಅಂದವಾಗಿ ಬೇರೆಲ್ಲಿಯೂ ಕಾಣಿಸೋದಿಲ್ಲ ಅನಿಸುತ್ತೆ. ಮೊನ್ನೆ ಎಕ್ಸಾಮ್ ಮುಗಿದ ಮೇಲೆ ಎಲ್ಲಿಗಾದರು ಹೋಗಬೇಕು ಎಂದು ಅನಿಸಿದಾಗಲೇ ಬಂಡಾಜೆಗೆ ಹೋಗೋಣವೆನಿಸಿತು. ಒಂದೈದು ಜನಕ್ಕೆ ಕರೆಮಾಡಿ ಕೊನೆಗೆ ಹಮೀದ್, ರಕ್ಷಿತ್ ಸಿಕ್ಕರು. ಎರಡು ಬೈಕಿನಲ್ಲಿ ಬೆಳಗ್ಗೆ 8 ಗಂಟೆಗೆನೆ ಬ್ಯಾಗ್'ಗೆ ನೀರು, ಬಿಸ್ಕೆಟ್ ಪ್ಯಾಕೇಟ್ಗಳನ್ನು ತುಂಬಿಕೊಂಡು, ನಾವು ಮೂವರು ಬಂಡಾಜೆಯ ತಣ್ಣನೆಯ ನೀರನ್ನು ಸ್ಪರ್ಶಿಸಲು ಹಾತೊರೆಯುತ್ತ ಹೊರಟೆವು. ಪಶ್ಚಿಮ ಘಟ್ಟದ ಬುಡಕ್ಕೆ ಹೋಗಿ ಬಂಡಾಜೆಯ ತುತ್ತಾ ತುದಿಗೆರಲು ಅರಣ್ಯ ಇಲಾಖೆಗೆ ಸಂಬಂಧಿಸಿದವರ ಅನುಮತಿಯನ್ನು ಪಡೆದುಕೊಂಡು ಪ್ರಶಾಂತವಾಗಿದ್ದ ಕಾಡೊಳಗೆ ಹೆಜ್ಜೆ ಹಾಕಿದೆವು. ದಾರಿ ತುಂಬಾ ತರೆಗೆಲೆ ಹರಡಿದ್ದರಿಂದ ಪ್ರತಿ ಹೆಜ್ಜೆ ಕೂಡ ಕಾಡಿನ ನಿಶಬ್ಧತೆಗೆ ಭಂಗ ತರುವಂತಿತ್ತು. ಆಗ ತಾನೇ ಮೇಲೇರುತ್ತಿದ್ದ ಸೂರ್ಯ ಕಾಡೊಳಗಿನ brightnessನ್ನು ಹೆಚ್ಚಿಸಲು ಮರಗಳ ಚಪ್ಪರದೊಂದಿಗೆ ಸೆಣಸುತ್ತ ಲಗ್ಗೆ ಇಡುತ್ತಿದ್ದ. ನಾವು ಮಾತ್ರ ಲೋಕದ ಚಿಂತೆಗಳೆಲ್ಲವನ್ನು ಬಿಟ್ಟು ಕಾಲಿ...

ತಡಿಯಂಡಮೊಳ್ ಚಾರಣ ಭಾಗ -2, ನಾಲ್ನಾಡು ಅರಮನೆ.

ತಡಿಯಂಡಮೊಳ್ ಚಾರಣ ಭಾಗ -2, ನಾಲ್ನಾಡು ಅರಮನೆ.           ಅರಮನೆಯನ್ನು ನೋಡಿಕೊಳ್ಳುವವರು ನಮ್ಮನ್ನೋಡಿ ವೇಗವಾಗಿ ಧಾವಿಸಿ ನಗುಮೊಗದಿಂದಲೇ ಸ್ವಾಗತಿಸಿದರು. ಅಂದಾ ಹಾಗೆ, ಈ ನಾಲ್ನಾಡು ಅರಮನೆಯ ನಿರ್ಮಾಣದ ಕುರಿತು ಇತಿಹಾಸವನ್ನು ಹುಡುಕುತ್ತ ಹೋದರೆ, ದೊಡ್ಡವೀರ ರಾಜೇಂದ್ರರು ಶತ್ರುಗಳಿಂದ ತನ್ನ ಕುಟುಂಬವನ್ನು ಕಾಪಾಡಿಕೊಳ್ಳುವ ಸಲುವಾಗಿ ಸೂಕ್ತ ಸ್ಥಳವನ್ನು ಹುಡುಕುತ್ತ ಬಂದಾಗ ಅವರ ಕಣ್ಣಿಗೆ ಬಿದ್ದಿದ್ದು ಈ ಬೆಟ್ಟ ಶ್ರೇಣಿಗಳಿಂದ ಹಾಗೂ ದಟ್ಟವಾದ ಕಾನನದಿಂದ ಸುತ್ತುವರೆದ ಯುವಕಪಾಡಿ ಗ್ರಾಮದಲ್ಲಿರುವ ಈ ಪ್ರದೇಶ. ಈ ಸ್ಥಳದಲ್ಲಿ 1792ರಲ್ಲಿ ಎರಡು ಅಂತಸ್ತಿನ ಸಣ್ಣ ಅರಮನೆಯನ್ನು  ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತೆ. ಅರಮನೆಯನ್ನು ನೋಡಿಕೊಳ್ಳುವವರು, ನಮ್ಮ ಊರಿನ ಬಗ್ಗೆ ಹಾಗೂ ನಮ್ಮ ಪರಿಚಯ ಮಾಡಿಕೊಳ್ಳುತ್ತಾ, ಅರಮನೆಯ ಬಗ್ಗೆ ಮಾಹಿತಿಯನ್ನು ನೀಡುತ್ತಾ ಅರಮನೆಯೊಳಗೆ ಹೆಜ್ಜೆ ಹಾಕಿದರು. ನಾವು ಅವರನ್ನು ಹಿಂಬಾಲಿಸುತ್ತಾ ಮುಖ್ಯ ದ್ವಾರವನ್ನು ದಾಟಿ ಅರಮನೆಯೊಳಗೆ ಹೋದಾಗ ಬಲ ಬದಿಯಲ್ಲಿ ಒಂದು ಮಂಟಪವಿದೆ. ಇವರು ಹೇಳುವ ಪ್ರಕಾರ ಇದು ದೊಡ್ಡವೀರ ರಾಜೇಂದ್ರರ ತಂಗಿಯ ವಿವಾಹ ಮಂಟಪವೆಂದು  ಹೇಳಿದರು. ಆದರೆ ನಾನು ಗೂಗಲ್ನಲ್ಲಿ ಜಾಲಾಡಿದಾಗ ದೊಡ್ಡವೀರ ರಾಜೇಂದ್ರರ ಮದುವೆ ಮಂಟಪವೆಂದು ತಿಳಿದು ಬರುತ್ತದೆ. ಈ ಮಂಟಪಕ್ಕೆ ನಾಲ್ಕು ಪ್ರವೇಶ ದ್ವಾರಗಳಿದ್ದು ಮೇಲ್ಬಾಗದಲ್ಲಿ ನಾಲ್ಕು ದಿಕ್ಕಿಗ...

ಬಿರ್ಲಾ ದೇವಸ್ಥಾನ ಕೋಲ್ಕತಾ.

  ಬೆಳಗ್ಗೆನೇ ನಿತ್ಯ ದಿನಚರಿಗಳನ್ನು ಮುಗಿಸಿ, ಕ್ಯಾಮೆರಾ ಬ್ಯಾಗ್ ಎತ್ತಿಕೊಂಡು ಕಂಟೋನ್ಮೆಂಟ್ ನಿಂದ ಹೊರಗೆ ಬಂದೆ. ಅಲ್ಲಿಂದ ಸೀದಾ ಬಂದವ ಪ್ರತಿ ರಜೆಯ ದಿನ ಚಾ ಕುಡಿವ ಸ್ಥಳಕ್ಕೆ ಬಂದು, ಒಂದು ಚಹಾದ ಜೊತೆಗೆ ಹೂಗ್ಲಿ ನದಿಯ ಹರಿವನ್ನು ನೋಡುತ್ತಾ  ಇವತ್ತು  ಎಲ್ಲಿಗೆ ಹೋಗೋದು ಎಂದು ಯೋಚಿಸುತ್ತಾ ಗೂಗಲ್ ಮಾಡಿದಾಗ ಮೊದಲೇ Note ಮಾಡಿಟ್ಟುಕೊಂಡಿದ್ದ ಬಿರ್ಲಾ ಮಂದಿರ ಕಾಣಿಸಿತು. ನಾನಿದ್ದ ಸ್ಥಳದಿಂದ ನಡೆದುಕೊಂಡು ಹೋಗಲು ಎಷ್ಟು ಕಿಮೀ ಇದೆ ಎಂದು ಹುಡುಕಿದಾಗ 8 ಕಿಮೀ ತೋರಿಸಿತು. ಅಲ್ಲಿಂದ ಸೀದಾ ವೇಗವಾಗಿ ಹೆಜ್ಜೆ ಯ ಮೇಲೊಂದು ಹೆಜ್ಜೆ  ಹಾಕುತ್ತಾ ಹೊರಟೆ. ಯಾಕಂದ್ರೆ 11ಕ್ಕೆ ದೇವಸ್ಥಾನ ಕ್ಲೋಸ್ ಆಗುತ್ತೆ ಎನ್ನುವ ಮಾಹಿತಿ ಕೂಡ ಗೂಗಲ್ ನಲ್ಲಿ ತೋರಿಸ್ತಾ ಇತ್ತು. ಇನ್ನು ನನ್ಯಾವತ್ತು ಸುತ್ತಾಡಲು ಪ್ರಾಥಮಿಕವಾಗಿ ಆಯ್ಕೆ ಮಾಡುವ ಸ್ಥಳ ಯಾವುದೆಂದರೆ, ನಮಗೆ ನಡೆದುಕೊಂಡು ಹೋಗಲು ಸಾಧ್ಯವಿರುವಂತಹ ಸ್ಥಳಗಳು, ಯಾಕಂದ್ರೆ ನಡೆದುಕೊಂಡು ಹೋಗುವಾಗ ನಮಗೆ ಬೇಕಾದ ಹಾಗೆ ಫೋಟೋವನ್ನು ಸೆರೆ ಹಿಡಿಯಬಹುದು ಹಾಗೂ ಏಕಾಂಗಿಯಾಗಿ ನಡೆದುಕೊಂಡು ಹೋಗುವ ಒಂದು ಮಜನೆ ಇದ್ಯಾಲ್ವ ಅದೊಂದು ನಶೆನೆ ಬೇರೆ ಮರ್ರೆ. ಅಂತೂ 10 ಗಂಟೆ ಆಗುವಷ್ಟರಲ್ಲಿ ಬಿರ್ಲಾ ಮಂದಿರಕ್ಕೆ ತಲುಪಿದೆ. ಮೊದಲನೆಯದಾಗಿ ಅಲ್ಲಿನ ಸಿಬ್ಬಂದಿ ನಗು ಮೊಗದೊಂದಿಗೆ ಸ್ವಾಗತಿಸಿದರೆ ಎರಡನೆಯದಾಗಿ ಇಲ್ಲಿ "ಯಾವುದೇ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿಯಲು ಅವಕಾಶ ಇಲ್ಲ" ಎಂದರು. ಇನ್ನು...