Skip to main content

ಹಳೇಬೀಡು ಸೈಕಲ್'ಯಾನ


              ಯುಗಾದಿಯ ರಜೆಯನ್ನು ಹೇಗೆ ಕಳೆಯಬೇಕೆಂದು ಯೋಚಿಸಿದಾಗ ಹೊಳೆದದ್ದು, ಶಿಲ್ಪಾಕಲೆಗಳ ಬೀಡು ಹಳೇಬೀಡು.
ಹಾಸನದಿಂದ ಹಳೇಬೀಡಿಗೆ ಸುಮಾರು 30 ಕಿಲೋಮೀಟರ್, ಬಸ್ಸಿನಲ್ಲಿ ಹೋಗುವ ಎಂದು ಅನಿಸಿತು. ಆದರೆ ಬಸ್ಸಿನಲ್ಲಿ ನಿದ್ದೆ ಮಾಡಿಕೊಂಡು ಹೋಗುವ ಬದಲು, ಸ್ವಲ್ಪ ಭಿನ್ನವಾಗಿ ಸೈಕಲ್ ನಲ್ಲಿ ಹೋಗಿಬರೋಣವೆನಿಸಿತು.

ನೇಸರನ ಬಿಸಿಲ ತಾಪ ಜಾಸ್ತಿಯಾಗುತ್ತಿದ್ದಂತೆ ಸೈಕಲ್ ಏರಿ ಹಳೇಬೀಡಿನತ್ತ ಹೊರಟೆ. ಬಸ್ಸುಯಾನಕ್ಕಿಂತ ಸೈಕಲ್ ಸವಾರಿಯ ಮಜಾನೆ ಬೇರೆ!. ದೂರ ಸಾಗಿದಂತೆ, ಸುಸ್ತಾಗಿ ಮಜಾ ಎಲ್ಲೋಯ್ತು ಎಂದು ಹುಡುಕುವ ಪರಿಸ್ಥಿತಿಯು ಬಂತು.
ಆದರೆ ನನ್ನಲ್ಲಿನ ಕುತೂಹಲ ಎಳೆದೊಯ್ದು, ನೇಸರ ನೆತ್ತಿಯ ಮೇಲೆ ತಲುಪುವ ವೇಳೆಗೆ ನಾನು ಹಳೇಬೀಡು ತಲುಪಿದೆ.
ಹಾಸನದಿಂದ ಸಾಲಗಾಮೆ ಮಾರ್ಗವಾಗಿ ಹಳೇಬೀಡಿಗೆ ಬಂದರೆ, ನಮ್ಮನ್ನು ಸ್ವಾಗತಿಸುವುದು ದ್ವಾರಸಮುದ್ರ.
ಆದರೆ ಈ ದ್ವಾರ ಸಮುದ್ರದ ಹೆಸರಿನಂತೆ ಇಲ್ಲದೆ, ಭಿನ್ನವಾಗಿ ಬರಡಗಿರೋದನ್ನು ಕಂಡು ಮನಸ್ಸಿಗೆ ಖೇದವುಂಟಾಯಿತು.

ಹಳೇಬೀಡು ಹೊಯ್ಸಳರ 12ನೇ ಶತಮಾನದಲ್ಲಿ ರಾಜಧಾನಿಯಾಗಿತ್ತು. ಈ ಹೊಯ್ಸಳೇಶ್ವರ ದೇವಾಲಯವನ್ನು 1121ರಲ್ಲಿ ಕಟ್ಟಿಸಲಾಯಿತೆಂದು ಹೇಳಲಾಗಿದೆ. ಈ ದೇವಾಲಯವನ್ನು ಪೂರ್ಣಗೊಳಿಸಲು ಸುಮಾರು 190 ವರ್ಷಗಳಾಗಿದೆಯೆಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಹೊಯ್ಸಳೇಶ್ವರ ದೇವಾಲಯವು ನಾಲ್ಕು ಪ್ರವೇಶ ದ್ವಾರಗಳನ್ನು ಹೊಂದಿದ್ದು,

ನಕ್ಷತ್ರಾಕಾರದಲ್ಲಿ ಬಳಪದ ಕಲ್ಲಿನಿಂದ ನಿರ್ಮಿಸಲ್ಪಟ್ಟಿವೆ. ಹಾಗೂ ದೇವಾಲಯದ ಗೋಡೆಗಳ ಮೇಲೆ ಪೌರಾಣಿಕ ಚಿತ್ರಣಗಳಿಂದ ಕೂಡಿದ ಕೆತ್ತನೆಗಳು, ಶಿಲ್ಪಾ ಸಮೃದ್ಧಿಯಿಂದ ಕೂಡಿ ಅತ್ಯಾಕರ್ಷಕವಾಗಿವೆ.
ಈ ದೇವಾಲಯದಲ್ಲಿ ಸುಮಾರು 35,000 ಕ್ಕೂ ಹೆಚ್ಚು ಶಿಲ್ಪಾಕೃತಿಗಳಿಂದ ಮೈದುಂಬಿಕೊಂಡಿವೆ.
ಈ ದೇವಾಲಯದ ಒಳಗೆ, ಈಶ್ವರ ಹಾಗೂ ಹೊಯ್ಸಳೇಶ್ವರ ದೇವರ ಎದುರಿಗೆ ಎರಡು ನಂದಿ ಮಂಟಪಗಳಿವೆ.
ಈ ದೇವಾಲಯದ ನಿರ್ಮಾಣವು ಮಹಮ್ಮದ್ದರ ದಾಳಿಯಿಂದಾಗಿ ಪೂರ್ಣಗೊಂಡಿಲ್ಲ. ಬಹುಶಃ ಪೂರ್ಣಗೊಂಡಿದ್ದರೆ ಶಿಲ್ಪಕಲೆಯ ವೈಭವ ಇನ್ನು ಹೆಚ್ಚಾಗಿರುತ್ತಿತ್ತೇನೋ!

ಆಗೇನೆ ಇಲ್ಲೊಂದು ಮ್ಯೂಸಿಯಂ ಇದೆ.
ಇಲ್ಲಿ ಶಿಥಿಲಾವಸ್ಥೆಯಲ್ಲಿರುವ ಸಾವಿರಕ್ಕೂ ಹೆಚ್ಚು ಶಿಲ್ಪಾಕೃತಿಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಇದು ತುಂಬಾ ಚೆನ್ನಾಗಿದೆ.
ದೇವಾಲಯದ ಶಿಲ್ಪಾಕೃತಿಗಳನ್ನು ನೋಡುತ್ತಾ ಶಿಲ್ಪಿಗಳ ಕೆತ್ತನೆಯ ಕೈಚಲಕವನ್ನು ಊಹಿಸಿಕೊಳ್ಳುತ್ತಿದ್ದ ಆಗೆ ಸಮಯ ಜಾರಿದ್ದು ತಿಳಿಯಲೇ ಇಲ್ಲ. ಅಷ್ಟೋತ್ತಿಗಾಗಲೇ ಸೂರ್ಯನ ತಾಪ ಇಳಿಮುಖದತ್ತ ಸಾಗಿತ್ತು. ಎರಡು ಎಳನೀರನ್ನು ಕುಡಿದು ಸೈಕಲ್ ಏರಿ ಹಳೇಬೀಡಿನ ಶಿಲ್ಪದ ಕೆತ್ತನೆಗಳ ಕಲೆಯ ವೈಭವವನ್ನು ನೆನೆದುಕೊಳ್ಳುತ್ತ, ಬಂದ ದಾರಿಯತ್ತ ಪಯಣ ಬೆಳೆಸಿದೆ.
ಹಾಸನ ತಲುಪುವ ವೇಳೆಗೆ ಸೂರ್ಯನು ಆಗಸದಿಂದ ಕಾಣೆಯಾಗಿದ್ದ. ನನಗಂತೂ ಹಳೇಬೀಡಿನ ದೇವಾಲಯದ ಶಿಲ್ಪಕಲೆಗಳು ಮನಸ್ಸಿಗೆ ತುಂಬಾ ಮುದ ನೀಡಿತು.
ಸಾಧ್ಯವಾದರೆ ನೀವೊಮ್ಮೆ ಭೇಟಿ ನೀಡಿ.
ಹೊಯ್ಸಳೇಶ್ವರ ದೇವಾಲಯವನ್ನು ಹಾಗೂ ಶಿಲ್ಪಾಕೃತಿಗಳನ್ನು ಕಣ್ತುಂಬಿಕೊಳ್ಳಿ.


Comments

Popular posts from this blog

ಬಂಡಾಜೆಯ ಹಾದಿ

               ===== ಬಂಡಾಜೆಯ ಹಾದಿ ===== ಮುಂಡಾಜೆ ಹಾಸ್ಟೆಲ್ನಲ್ಲಿ ಇರುವಾಗಲೇ ನನಿಗೆ ಬಂಡಾಜೆಗೊಮ್ಮೆ ಹೋಗ್ಬೇಕು ಎಂಬ ಆಸೆ ಮೂಡಿತ್ತು.(ಎಂಟು ವರ್ಷದ ಹಿಂದೆ)ಯಾಕೆಂದರೆ ಬೆಳ್ಳಿಯ ಹೊಳಪಿನಿಂದ ವಯ್ಯಾರದಿಂದ ಮೇಲಿಂದ ಜಿಗಿಯುವುದು ನಮ್ಮ ಹಾಸ್ಟೆಲ್ಗೆ ಕಾಣುವಷ್ಟು ಅಂದವಾಗಿ ಬೇರೆಲ್ಲಿಯೂ ಕಾಣಿಸೋದಿಲ್ಲ ಅನಿಸುತ್ತೆ. ಮೊನ್ನೆ ಎಕ್ಸಾಮ್ ಮುಗಿದ ಮೇಲೆ ಎಲ್ಲಿಗಾದರು ಹೋಗಬೇಕು ಎಂದು ಅನಿಸಿದಾಗಲೇ ಬಂಡಾಜೆಗೆ ಹೋಗೋಣವೆನಿಸಿತು. ಒಂದೈದು ಜನಕ್ಕೆ ಕರೆಮಾಡಿ ಕೊನೆಗೆ ಹಮೀದ್, ರಕ್ಷಿತ್ ಸಿಕ್ಕರು. ಎರಡು ಬೈಕಿನಲ್ಲಿ ಬೆಳಗ್ಗೆ 8 ಗಂಟೆಗೆನೆ ಬ್ಯಾಗ್'ಗೆ ನೀರು, ಬಿಸ್ಕೆಟ್ ಪ್ಯಾಕೇಟ್ಗಳನ್ನು ತುಂಬಿಕೊಂಡು, ನಾವು ಮೂವರು ಬಂಡಾಜೆಯ ತಣ್ಣನೆಯ ನೀರನ್ನು ಸ್ಪರ್ಶಿಸಲು ಹಾತೊರೆಯುತ್ತ ಹೊರಟೆವು. ಪಶ್ಚಿಮ ಘಟ್ಟದ ಬುಡಕ್ಕೆ ಹೋಗಿ ಬಂಡಾಜೆಯ ತುತ್ತಾ ತುದಿಗೆರಲು ಅರಣ್ಯ ಇಲಾಖೆಗೆ ಸಂಬಂಧಿಸಿದವರ ಅನುಮತಿಯನ್ನು ಪಡೆದುಕೊಂಡು ಪ್ರಶಾಂತವಾಗಿದ್ದ ಕಾಡೊಳಗೆ ಹೆಜ್ಜೆ ಹಾಕಿದೆವು. ದಾರಿ ತುಂಬಾ ತರೆಗೆಲೆ ಹರಡಿದ್ದರಿಂದ ಪ್ರತಿ ಹೆಜ್ಜೆ ಕೂಡ ಕಾಡಿನ ನಿಶಬ್ಧತೆಗೆ ಭಂಗ ತರುವಂತಿತ್ತು. ಆಗ ತಾನೇ ಮೇಲೇರುತ್ತಿದ್ದ ಸೂರ್ಯ ಕಾಡೊಳಗಿನ brightnessನ್ನು ಹೆಚ್ಚಿಸಲು ಮರಗಳ ಚಪ್ಪರದೊಂದಿಗೆ ಸೆಣಸುತ್ತ ಲಗ್ಗೆ ಇಡುತ್ತಿದ್ದ. ನಾವು ಮಾತ್ರ ಲೋಕದ ಚಿಂತೆಗಳೆಲ್ಲವನ್ನು ಬಿಟ್ಟು ಕಾಲಿ...

ತಡಿಯಂಡಮೊಳ್ ಚಾರಣ ಭಾಗ -2, ನಾಲ್ನಾಡು ಅರಮನೆ.

ತಡಿಯಂಡಮೊಳ್ ಚಾರಣ ಭಾಗ -2, ನಾಲ್ನಾಡು ಅರಮನೆ.           ಅರಮನೆಯನ್ನು ನೋಡಿಕೊಳ್ಳುವವರು ನಮ್ಮನ್ನೋಡಿ ವೇಗವಾಗಿ ಧಾವಿಸಿ ನಗುಮೊಗದಿಂದಲೇ ಸ್ವಾಗತಿಸಿದರು. ಅಂದಾ ಹಾಗೆ, ಈ ನಾಲ್ನಾಡು ಅರಮನೆಯ ನಿರ್ಮಾಣದ ಕುರಿತು ಇತಿಹಾಸವನ್ನು ಹುಡುಕುತ್ತ ಹೋದರೆ, ದೊಡ್ಡವೀರ ರಾಜೇಂದ್ರರು ಶತ್ರುಗಳಿಂದ ತನ್ನ ಕುಟುಂಬವನ್ನು ಕಾಪಾಡಿಕೊಳ್ಳುವ ಸಲುವಾಗಿ ಸೂಕ್ತ ಸ್ಥಳವನ್ನು ಹುಡುಕುತ್ತ ಬಂದಾಗ ಅವರ ಕಣ್ಣಿಗೆ ಬಿದ್ದಿದ್ದು ಈ ಬೆಟ್ಟ ಶ್ರೇಣಿಗಳಿಂದ ಹಾಗೂ ದಟ್ಟವಾದ ಕಾನನದಿಂದ ಸುತ್ತುವರೆದ ಯುವಕಪಾಡಿ ಗ್ರಾಮದಲ್ಲಿರುವ ಈ ಪ್ರದೇಶ. ಈ ಸ್ಥಳದಲ್ಲಿ 1792ರಲ್ಲಿ ಎರಡು ಅಂತಸ್ತಿನ ಸಣ್ಣ ಅರಮನೆಯನ್ನು  ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತೆ. ಅರಮನೆಯನ್ನು ನೋಡಿಕೊಳ್ಳುವವರು, ನಮ್ಮ ಊರಿನ ಬಗ್ಗೆ ಹಾಗೂ ನಮ್ಮ ಪರಿಚಯ ಮಾಡಿಕೊಳ್ಳುತ್ತಾ, ಅರಮನೆಯ ಬಗ್ಗೆ ಮಾಹಿತಿಯನ್ನು ನೀಡುತ್ತಾ ಅರಮನೆಯೊಳಗೆ ಹೆಜ್ಜೆ ಹಾಕಿದರು. ನಾವು ಅವರನ್ನು ಹಿಂಬಾಲಿಸುತ್ತಾ ಮುಖ್ಯ ದ್ವಾರವನ್ನು ದಾಟಿ ಅರಮನೆಯೊಳಗೆ ಹೋದಾಗ ಬಲ ಬದಿಯಲ್ಲಿ ಒಂದು ಮಂಟಪವಿದೆ. ಇವರು ಹೇಳುವ ಪ್ರಕಾರ ಇದು ದೊಡ್ಡವೀರ ರಾಜೇಂದ್ರರ ತಂಗಿಯ ವಿವಾಹ ಮಂಟಪವೆಂದು  ಹೇಳಿದರು. ಆದರೆ ನಾನು ಗೂಗಲ್ನಲ್ಲಿ ಜಾಲಾಡಿದಾಗ ದೊಡ್ಡವೀರ ರಾಜೇಂದ್ರರ ಮದುವೆ ಮಂಟಪವೆಂದು ತಿಳಿದು ಬರುತ್ತದೆ. ಈ ಮಂಟಪಕ್ಕೆ ನಾಲ್ಕು ಪ್ರವೇಶ ದ್ವಾರಗಳಿದ್ದು ಮೇಲ್ಬಾಗದಲ್ಲಿ ನಾಲ್ಕು ದಿಕ್ಕಿಗ...

ಬಿರ್ಲಾ ದೇವಸ್ಥಾನ ಕೋಲ್ಕತಾ.

  ಬೆಳಗ್ಗೆನೇ ನಿತ್ಯ ದಿನಚರಿಗಳನ್ನು ಮುಗಿಸಿ, ಕ್ಯಾಮೆರಾ ಬ್ಯಾಗ್ ಎತ್ತಿಕೊಂಡು ಕಂಟೋನ್ಮೆಂಟ್ ನಿಂದ ಹೊರಗೆ ಬಂದೆ. ಅಲ್ಲಿಂದ ಸೀದಾ ಬಂದವ ಪ್ರತಿ ರಜೆಯ ದಿನ ಚಾ ಕುಡಿವ ಸ್ಥಳಕ್ಕೆ ಬಂದು, ಒಂದು ಚಹಾದ ಜೊತೆಗೆ ಹೂಗ್ಲಿ ನದಿಯ ಹರಿವನ್ನು ನೋಡುತ್ತಾ  ಇವತ್ತು  ಎಲ್ಲಿಗೆ ಹೋಗೋದು ಎಂದು ಯೋಚಿಸುತ್ತಾ ಗೂಗಲ್ ಮಾಡಿದಾಗ ಮೊದಲೇ Note ಮಾಡಿಟ್ಟುಕೊಂಡಿದ್ದ ಬಿರ್ಲಾ ಮಂದಿರ ಕಾಣಿಸಿತು. ನಾನಿದ್ದ ಸ್ಥಳದಿಂದ ನಡೆದುಕೊಂಡು ಹೋಗಲು ಎಷ್ಟು ಕಿಮೀ ಇದೆ ಎಂದು ಹುಡುಕಿದಾಗ 8 ಕಿಮೀ ತೋರಿಸಿತು. ಅಲ್ಲಿಂದ ಸೀದಾ ವೇಗವಾಗಿ ಹೆಜ್ಜೆ ಯ ಮೇಲೊಂದು ಹೆಜ್ಜೆ  ಹಾಕುತ್ತಾ ಹೊರಟೆ. ಯಾಕಂದ್ರೆ 11ಕ್ಕೆ ದೇವಸ್ಥಾನ ಕ್ಲೋಸ್ ಆಗುತ್ತೆ ಎನ್ನುವ ಮಾಹಿತಿ ಕೂಡ ಗೂಗಲ್ ನಲ್ಲಿ ತೋರಿಸ್ತಾ ಇತ್ತು. ಇನ್ನು ನನ್ಯಾವತ್ತು ಸುತ್ತಾಡಲು ಪ್ರಾಥಮಿಕವಾಗಿ ಆಯ್ಕೆ ಮಾಡುವ ಸ್ಥಳ ಯಾವುದೆಂದರೆ, ನಮಗೆ ನಡೆದುಕೊಂಡು ಹೋಗಲು ಸಾಧ್ಯವಿರುವಂತಹ ಸ್ಥಳಗಳು, ಯಾಕಂದ್ರೆ ನಡೆದುಕೊಂಡು ಹೋಗುವಾಗ ನಮಗೆ ಬೇಕಾದ ಹಾಗೆ ಫೋಟೋವನ್ನು ಸೆರೆ ಹಿಡಿಯಬಹುದು ಹಾಗೂ ಏಕಾಂಗಿಯಾಗಿ ನಡೆದುಕೊಂಡು ಹೋಗುವ ಒಂದು ಮಜನೆ ಇದ್ಯಾಲ್ವ ಅದೊಂದು ನಶೆನೆ ಬೇರೆ ಮರ್ರೆ. ಅಂತೂ 10 ಗಂಟೆ ಆಗುವಷ್ಟರಲ್ಲಿ ಬಿರ್ಲಾ ಮಂದಿರಕ್ಕೆ ತಲುಪಿದೆ. ಮೊದಲನೆಯದಾಗಿ ಅಲ್ಲಿನ ಸಿಬ್ಬಂದಿ ನಗು ಮೊಗದೊಂದಿಗೆ ಸ್ವಾಗತಿಸಿದರೆ ಎರಡನೆಯದಾಗಿ ಇಲ್ಲಿ "ಯಾವುದೇ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿಯಲು ಅವಕಾಶ ಇಲ್ಲ" ಎಂದರು. ಇನ್ನು...